ಶಿರಸಿ: ಇಲ್ಲಿಯ ಟಿ.ಎಸ್.ಎಸ್ ಸುಪರ್ ಮಾರ್ಕೆಟ್ನಲ್ಲಿ ಟಾಟಾ ಶಕ್ತಿ ರೂಫಿಂಗ್ ಶೀಟ್ ಖರೀದಿಸಿದ ಶಿರಸಿಯ ಚೇತನ ಗಣೇಶ ಅವರಿಗೆ ‘ಟಾಟಾ ಶಕ್ತಿ ಸುಲ್ತಾನ್ ಯೋಜನೆಯಡಿ ಮೊಬೈಲ್ ಫೋನ್ ಬಹುಮಾನ ದೊರೆತಿದೆ. ಟಿ.ಎಸ್.ಎಸ್. ಅಧ್ಯಕ್ಷ ಶಾಂತಾರಾಮ ವಿ. ಹೆಗಡೆ ಹಾಗೂ ಪ್ರಧಾನ ವ್ಯವಸ್ಥಾಪಕ ರವೀಶ ಎ. ಹೆಗಡೆ ಅವರು ಚೇತನ ಗಣೇಶ ಅವರಿಗೆ ಬಹುಮಾನ ವಿತರಿಸಿದರು. ಸಂಘದ ಸುಪರ್ ಮಾರ್ಕೆಟ್ನಲ್ಲಿ ಖರೀದಿಸಿದವರಿಗೆ ಇದು ಮೊಬೈಲ್ ಬಹುಮಾನ ದೊರೆಯುತ್ತಿರುವುದು ಇದು ಎರಡನೆಯ ಬಾರಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.